Wednesday, April 30, 2008

ತಮಿಳಿನಲ್ಲಿ ಪ್ರಚಾರ - ಕ.ರ.ವೇ. ಪ್ರತಿಭಟನೆ


Monday, April 28, 2008

ಪರಭಾಷೆಯಲ್ಲಿ ಪ್ರಚಾರ - ಗುಡುಗಿದ ಕ.ರ.ವೇ.




Thursday, April 10, 2008

೨೦೦೮ ರ ವಿಧಾನ ಸಭಾ ಚುಣಾವಣೆ - ಪಕ್ಷಗಳಿಂದ ಕನ್ನಡಿಗರ ಅಪೇಕ್ಷೆ

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಸನಿಹವಾಗುತ್ತಿದೆ. ಹೀಗಿರುವಾಗ, ಕನ್ನಡದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ, ಕನ್ನಡದಲ್ಲೇ ಪ್ರಚಾರ ಮಾಡುವ, ಚುನಾವಣ ಪ್ರಚಾರ ಸಾಮಗ್ರಿಗಳನ್ನು ಕನ್ನಡದಲ್ಲಿಯೇ ಹಾಕುವ ಜವಾಬ್ದಾರಿ ರಾಜಕೀಯಪಕ್ಷಗಳದ್ದಾಗಿದೆ.ಈ ಜವಾಬ್ದಾರಿಯನ್ನು ನೆನಪಿಸಿ, ಕರ್ನಾಟಕದ ರಾಜಕೀಯ ಪಕ್ಷಗಳಾದ, ಕಾಂಗ್ರೆಸ್, ಭಾರತೀಯ ಜನತಾ ಪಕ್ಷ, ಜಾತ್ಯಾತೀತ ಜನತಾ ದಳ, ಸಂಯುಕ್ತ ಜನತಾ ದಳ, ಬಹುಜನಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷಗಳಿಗೆ ಕನ್ನಡಿಗರ ಅಪೇಕ್ಷೆಗಳ ಪಟ್ಟಿಯನ್ನು ನೀಡಿದೆವು:- ಪತ್ರ ಈ ಕೆಳಕಂಡಂತಿದೆ

ಮಾನ್ಯರೇ,

ವಿಷಯ: ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದವತಿಯಿಂದ ಕನ್ನಡಿಗರಿಗೆ ಟಿಕೆಟ್ ನೀಡಬೇಕು ಹಾಗು ಚುನಾವಣೆಯ ಪ್ರಚಾರ ಸಾಮಗ್ರಿಗಳನ್ನು ಕನ್ನಡ ಭಾಷೆಯಲ್ಲಿ ಮಾತ್ರ ಮುದ್ರಿಸಿ, ಕನ್ನಡ ಭಾಷೆಯಲ್ಲಿಯೇ ಚುನಾವಣಾ ಪ್ರಚಾರ ನಡೆಸುವಂತೆ ಒತ್ತಾಯಿಸಿ ನಮ್ಮ ವೇದಿಕೆ ಸಲ್ಲಿಸುತ್ತಿರುವ ಮನವಿ ಪತ್ರ.

ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ನಾಡಿನಾದ್ಯಂತ ಇರುವ ನಮ್ಮ ವೇದಿಕೆಯ ಲಕ್ಷಾಂತರ ಕಾರ್ಯಕರ್ತರು ಹೋರಾಟ-ಚಿಂತನೆಗಳ ಮೂಲಕ ದುಡಿಯುತ್ತಿರುವುದು ತಮಗೆ ತಿಳಿದಿರುವ ವಿಚಾರವಾಗಿದೆ. ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಕನ್ನಡಿಗರ ಹಾಗು ಕರ್ನಾಟಕದ ಹಿತ ಕಾಯಬೇಕೆಂದು ಒತ್ತಾಯಿಸಿ ನಮ್ಮ ವೇದಿಕೆಯು ಈ ಕೆಳಕಂಡ ವಿಷಯಗಳನ್ನು ತಮ್ಮ ಗಮನಕ್ಕೆ ತರಲು ಬಯಸುತ್ತದೆ.

ಪ್ರಮುಖ ಒತ್ತಾಯಗಳು

೧. ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಲ್ಲಿ ವಾಸಿಸುತ್ತಿರುವವರೆಲ್ಲರೂ ಕರ್ನಾಟಕ ರಾಜ್ಯ ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿದ್ದು ಎಲ್ಲರು ಕನ್ನಡಿಗರಾಗಿರುವುದರಿಂದ ತಮ್ಮ ಪಕ್ಷದ ಪ್ರಚಾರ ಕಾರ್ಯ ಕನ್ನಡ ಭಾಷೆಯಲ್ಲಿ ನಡೆಯಬೇಕು.
೨. ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಬಳಸುವ ಪ್ರಚಾರ ಸಾಮಗ್ರಿಗಳಾದ ಬ್ಯಾನರ್, ಗೋಡೆಬರಹ, ಕರಪತ್ರ, ಬಂಟಿಂಗ್ಸ್, ಜಾಹಿರಾತು ಫಲಕ ಹಾಗು ವಾಲ್ ಪೋಸ್ಟರ್ ಸೇರಿದಂತೆ ಪತ್ರಿಕೆಗಳಿಗೆ ನೀಡುವ ಜಾಹಿರಾತು ಸಂಪೂರ್ಣವಾಗಿ ಕನ್ನಡ ಭಾಷೆಯಲ್ಲಿರಬೇಕು.
೩. ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಿಗೆ ತಮ್ಮ ಪಕ್ಷಗಳ ಮುಖಂಡರಾಗಿರುವ ಕನ್ನಡಿಗರಿಗೆ ಟಿಕೆಟ್ ನೀಡಬೇಕು. ಯಾವುದೇ ಕಾರಣಕ್ಕು ಹೊರ ರಾಜ್ಯಗಳಿಂದ ವಲಸೆ ಬರುವ ಕನ್ನಡೇತರರರಿಗೆ ಟಿಕೇತ್ ನೀಡಿದರೆ ಅಂತಹ ಅಭ್ಯರ್ತಿಗಳ ವಿರುದ್ಧ ಹಾಗು ಟಿಕೆಟ್ ನೀಡಿದ ಪಕ್ಷದ ವಿರುದ್ಧ ಆಯಾ ಮತ ಕ್ಷೇತ್ರಗಳಲ್ಲಿ ಹಾಗು ರಾಜ್ಯಾದ್ಯಂತ ನಮ್ಮ ವೇದಿಕೆಯು ಹೋರಾಟ ನಡೆಸಲಿದೆ.
೪. ಚುನಾವಣ ಪ್ರಚಾರ ಸಭೆಗಳಿಗೆ ಹೊರರಾಜ್ಯಗಳ ನಾಯಕರುಗಳು ಹಾಗು ಪರಭಾಷೆಯ ಚಲನಚಿತ್ರ ನಟ-ನಟಿಯರನು ಕರೆಸಿ ಭಾಷಣ ಮಾಡಿಸಿ ಕರ್ನಾಟಕದ ಸಂಸ್ಕೃತಿಯನ್ನು ಹಾಳುಮಾಡುವುದರ ಜೊತೆಗೆ ರಾಜ್ಯದ ರಾಜಕೀಯ ನಾಯಕರುಗಳಿಗೆ ಹಾಗು ಕನ್ನಡದ ಚಲನ ಚಿತ್ರ ನಟ-ನಟಿಯರಿಗೆ ಅವಮಾನ ಮಾಡಬಾರದು.
೫. ತಮ್ಮ ಪಕ್ಷದ ಚುನಾವಣ ಸಭೆಗಳಲ್ಲಿ ಕನ್ನಡಿಗರ ಮದ್ಯೆ ವಿಷಬೀಜ ಬಿತ್ತಿ ಉತ್ತರ ಕರ್ನಾಟಕ, ಹಳೇ ಮೈಸೂರು, ಕರಾವಳಿ ಕರ್ನಾಟಕ, ಮುಂಬೈ ಕರ್ನಾಟಕ ಹಾಗು ಹೈದರಾಬಾದ್ ಕರ್ನಾಟಕ, ಕೊಡಗು ಎಂದು ವಿಭಾಗಗಳಾಗಿ ಜನರಿಗೆ ತಪ್ಪು ಸಂದೇಶವನ್ನು ನೀಡದೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡಬೇಕು.
೬. ಕನ್ನಡ ಭಾಷೆಯ ಬೆಳವಣಿಗೆ ಸೇರಿದಂತೆ ನೆಲ-ಜಲ, ಗಡಿ, ಉದ್ಯೋಗ, ಶಿಕ್ಷಣ, ವ್ಯಾಪಾರ ಸೇರಿದಂತೆ ರೈತ-ಕಾರ್ಮಿಕ, ವಿದ್ಯಾರ್ಥಿ ಯುವಜನರು, ಮಹಿಳೆಯರು - ಮಕ್ಕಳ ಶ್ರೇಯೋಭಿವೃದ್ದಿಗೆ ತಮ್ಮ ಪಕ್ಷದ ನಿಲುವನ್ನು ಪ್ರಣಾಳಿಕೆಯಲ್ಲಿ ತಿಳಿಸಬೇಕು.
೭. ತಮ್ಮ ಪಕ್ಷದಿಂದ ಸಮಾಜಘಾತುಕ ಶಕ್ತಿಗಳಿಗೆ ಹಾಗು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ವ್ಯಕ್ತಿಗಳಿಗೆ ಟಿಕೆಟ್ ನೀಡಬಾರದು.
೮. ರಾಜ್ಯದ ರೈತರ - ನೇಕಾರರ - ಉದ್ಯಮಿಗಳ ಆತ್ಮಹತ್ಯೆಯನ್ನು ತಡೆಯುವುದು ಸೇರಿದಂತೆ ರಾಜ್ಯದ ಖನಿಜ-ವನ್ಯ ಸಂಪತ್ತಿನ ರಕ್ಷಣೆ ಸೇರಿದಂತೆ ಅಂತರಾಜ್ಯ ನದಿ ನೀರಿನ ವಿಚಾರವಾಗಿ ತಮ್ಮ ಪಕ್ಷದ ನಿಲುವನ್ನು ಪ್ರಣಾಳಿಕೆಯಲ್ಲಿ ತಿಳಿಸಬೇಕು.
೯. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಮಾನ ಸೇರಿದಂತೆ ಕೇಂದ್ರ ಸರ್ಕಾರದ ವತಿಯಿಂದ ರಾಜ್ಯಾಭಿವೃದ್ದಿಗೆ ಸಂವಿಧಾನದತ್ತವಾಗಿ ದೊರಕಬೇಕಾಗಿರುವ ಅನುದಾನಗಳನ್ನು ತಮ್ಮ ಪಕ್ಷ ಯಾವರೀತಿ ಹೋರಾಟ ನಡೆಸಿ ರಾಜ್ಯಕ್ಕೆ ತರಲಿದೆ ಎಂಬುದನ್ನು ಪ್ರಣಾಳಿಕೆಯಲ್ಲಿ ತಿಳಿಸಬೇಕು.
೧೦. ವಲಸಿಗರ ಕೊಂಪೆಯಾಗುತ್ತಿರುವ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ರಕ್ಷಣೆ ಸೇರಿದಂತೆ ಸರ್ಕಾರಿ ಹಾಗು ಖಾಸಗಿ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ತಮ್ಮ ಪಕ್ಷ ತೆಗೆದುಕೊಳ್ಳುವ ಕ್ರಮವನ್ನು ಪ್ರಣಾಳಿಕೆಯಲ್ಲಿ ತಿಳಿಸಬೇಕು.


ವಿಶ್ವದ ಭೂಪಟದಲ್ಲಿ ತನ್ನದೇ ಆದ ಹೆಸರನ್ನು ಹೊಂದಿರುವ ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕ ರಾಜ್ಯದ ರಕ್ಷಣೆ ಹಾಗು ಅಭಿವೃದ್ಧಿಗೆ ಪ್ರತಿಯೊಬ್ಬರು ಶಕ್ತಿ ಮೀರಿ ದುಡಿಯಬೇಕಾಗಿರುವುದರಿಂದ ನಮ್ಮ ವೇದಿಕೆಯ ಬಹು ದೊಡ್ಡ ಕನಸಾದ'ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ' ಎಂಬ ಉದ್ದೇಶದ ಈಡೇರಿಕೆಗೆ ಪಣತೊಟ್ಟು ನಿಂತಿರುವ ನಮ್ಮ ವೇದಿಕೆಯ ಕನ್ನಡಿಗರ ಮತಗಳಿಂದ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ತಮ್ಮ ಪಕ್ಷಕ್ಕೆ ರಾಜ್ಯದ ಹಿತಕ್ಕಾಗಿ ಮೇಲ್ಕಂಡ ಮನವಿ ಪತ್ರ ಸಲ್ಲಿಸುತ್ತಿದೆ.

ವಂದನೆಗಳೊಂದಿಗೆ,

(ಟಿ ಏ. ನಾರಾಯಣಗೌಡ) - ರಾಜ್ಯಾಧ್ಯಕ್ಷರು; (ಜಯದೇವ ಪ್ರಸನ್ನ) - ರಾಜ್ಯ ಪ್ರಧಾನ ಕಾರ್ಯದರ್ಶಿ; (ಆರ್. ಗುರುಮೂರ್ತಿ) - ರಾಜ್ಯ ಉಪಾಧ್ಯಕ್ಷರು; (ದಾ.ಪಿ. ಅಂಜನಪ್ಪ) - ಅಧ್ಯಕ್ಷರು, ಬೆಂ. ನಗರ ಜಿಲ್ಲೆ; (ಬಸವರಾಜ್ ಪಡಕೋಟಿ) - ಕಾರ್ಯಾಧ್ಯಕ್ಷರು ಬೆಂ. ನಗರ; (ಕೆ.ಎಂ. ನಾಗೇಂದ್ರಬಾಬು) - ಅಧ್ಯಕ್ಷರು, ಬೆಂ ನಗರ; (ಎ.ಎಸ್. ನಾಗರಾಜ್) - ಪ್ರಧಾನ ಕಾರ್ಯದರ್ಶಿ, ಬೆಂ.ನಗರ; (ಸತೀಶ್ ಗೌಡ) - ಖಜಾಂಚಿ, ಬೆಂ.ನಗರ

Tuesday, April 1, 2008

ಹೊಗೇನಕಲ್ ನೆಲವನ್ನು ಅತಿಕ್ರಮಿಸಿರುವ ತಮಿಳುನಾಡಿನ ವಿರುದ್ಧ ಕ.ರ.ವೇ. ತೆಗೆದುಕೊಂಡ ನಿರ್ಣಾಯಗಳು

೧. ಕರ್ನಾಟಕದ ನೆಲವನ್ನು ಅತಿಕ್ರಮಿಸಿರುವ ತಮಿಳುನಾಡು ಸರ್ಕಾರದ ವಿರುದ್ಧ ರಾಜ್ಯಪಾಲರು ಹಾಗು ರಾಜ್ಯದ ಅಡ್ವಕೇಟ್ ಜನರಲ್ ರವರು ಸುಪ್ರೀಂ ಕೋರ್ಟ್ ಹಾಗು ಕೇಂದ್ರಕ್ಕೆ ತಕ್ಷಣ ವರದಿ ಸಲ್ಲಿಸಿ ತಮಿಳುನಾಡು ಯೋಜನೆಗೆ ಅನುಮತಿ ನೀಡದಂತೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು.

೨. ಕೇಂದ್ರದ ಯು.ಪಿ.ಏ. ಸರ್ಕಾರದ ಪಾಲುದಾರ ಪಕ್ಷವಾದ ಡಿ.ಎಂ.ಕೆ. ಅವರು ರಾಜ್ಯದ ನೆಲವನ್ನು ಕಬಳಿಸುಲು ವ್ಯವಸ್ತಿತ ಸಂಚನ್ನು ರೂಪಿಸುತ್ತಿದ್ದರೂ, ಮೌನವಾಗಿರುವ ರಾಜ್ಯದ ಸಚಿವರುಗಳು ಹಾಗು ಕೆಲವು ಸಂಸದರು ಬಾಯಿ ಬಿಟ್ಟು ಮಾತನಾಡುವಂತೆ ಒತ್ತಡ ತರುವುದು ಹಾಗು ರಾಜ್ಯದ ಹಿತಾಸಕ್ತಿ ಕಾಪಾಡಲು ವಿಫಲರಾಗಿರುವ ಸಚಿವರು ಹಾಗು ಸಂಸದರ ವಿರುದ್ಧ ಹೋರಾಟ ನಡೆಸುವುದು.

೩. ತಮಿಳುನಾಡು ಸರ್ಕಾರದ ಹೊಗೇನಕಲ್ ಯೋಜನೆಯನ್ನು ಕೈಬಿಡುವವರೆಗು ರಾಜ್ಯದಲ್ಲಿ ತಮಿಳು ಚಲನಚಿತ್ರ ಪ್ರದರ್ಶನ ಹಾಗು ತಮಿಳು ಕೇಬಲ್ ಚ್ಯಾನಲ್ ಗಳನ್ನು ನಿಷೇದಿಸುವುದು.

೪. ಕಾವೇರಿ ಕಣಿವೆ ಪ್ರದೇಶಗಳಾದ ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ತಮಿಳುನಾಡಿನ ವಿರುದ್ಧ ರೈತರೊಡಗೂಡಿ ನಿರಂತರ ಹೋರಾಟ ನಡೆಸುವುದು.

೫. ತಮಿಳುನಾಡಿನ ವಿರುದ್ಧದ ಹೋರಾಟವನ್ನು ಉತ್ತರ ಕರ್ನಾಟಕ ಜಿಲ್ಲೆಗಳಿಗೂ ವಿಸ್ತರಿಸುವುದರ ಜೊತೆಗೆ ಕರ್ನಾಟಕ ಬಂದ್ ನಡೆಸುವುದರ ಮೂಲಕ ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ವಿರೋಧವನ್ನು ತೋರಿಸುವುದು.

೬. ಹೊಗೇನಕಲ್ ಹೋರಾಟಕ್ಕೆ ನಾಡಿನ ಚಿತ್ರರಂಗದ ಗಣ್ಯರು, ಸಾಹಿತಿಗಳು, ಮಠಾಧೀಶರು, ರೈತ ಸಂಘಟನೆ ಹಾಗು ದಲಿತ ಸಂಘಟನೆಯನ್ನು ಕೂಡಿಸಿಕೊಂಡು ಜನಾಂದೋಲನ ರೂಪಿಸುವುದು.

೭. ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ತಮಿಳುನಾಡು ಸರ್ಕಾರದ ವಿರುದ್ಧ ಹೋರಾಟ ನಡೆಸಿ ಕೇಂದ್ರದ ಮೇಲೆ ಒತ್ತಡ ತಂದು ಯೋಜನೆಗೆ ಅನುಮತಿ ದೊರೆಯದಂತೆ ನೋಡಿಕೊಳ್ಳುವುದು.

೮. ಚಾಮರಾಜ ನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ಕನ್ನಡಿಗರ ಬೃಹತ್ ಜಾಥ ಹಾಗು ಬಹಿರಂಗ ಸಭೆಯನ್ನು ನಡೆಸಿ ತಮಿಳುನಾಡು ಸರ್ಕಾರಕ್ಕೆ ಸೂಕ್ತ ಎಚ್ಚರಿಕೆ ನೀಡುವುದು.